ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ

ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ
ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ
ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ
ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ?
ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ
ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ, ನಾನು
ನೆಚ್ಚಿರುವ ಪ್ರಿಯಗಳೊಳೆ ಶ್ರೇಷ್ಠ, ನನ್ನದು ಎನುವ
ಒಂದೇ ಒಂದು ಲಕ್ಷ್ಯ. ಹಾಗಿದ್ದರೂ ಏನು
ನೀ ಸದಾ ಇರುವ, ನೀ ಬಯಸಿದಂತಿರಗೊಡುವ
ನನ್ನ ಮೃದು ಹೃದಯದಾವರಣವೊಂದರ ಹೊರತು
ಅತಿಹೀನ ಕಳ್ಳ ವ್ಯಕ್ತಿಗು ಯಾವುದೇ ಹೊತ್ತು
ಕೈಗೆ ಸಿಗುವಂತೆ ರಕ್ಷಣೆಯ ಹೊರಗುಳಿದಿರುವೆ.
ನನ್ನಿಂದಲೂ ನಿನ್ನ ಕದಿವವರು ಇರಬಹುದು
ಇಂಥ ರತ್ನಕ್ಕಾಗಿ ಎಂಥವರೂ ಕೆಡಬಹುದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 48
How careful was I when I took my way

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೧೮
Next post ಊರ್ಧ್ವರೇತಸ್

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys